Kannada Translation

Ayah by Ayah

Tags

Download Links

Kannada Translation translation for Surah Al-Jinn — Ayah 27

72:27
إِلَّا مَنِ ٱرۡتَضَىٰ مِن رَّسُولٖ فَإِنَّهُۥ يَسۡلُكُ مِنۢ بَيۡنِ يَدَيۡهِ وَمِنۡ خَلۡفِهِۦ رَصَدٗا ٢٧
ತಾನು ಮೆಚ್ಚಿಕೊಂಡ ಯಾವುದೇ ದೂತರಿಗೆ ಹೊರತು1. ಆಗ ಆ ದೂತರ ಮುಂದೆಯೂ ಹಿಂದೆ ಯೂ ಅವನು ಕಾವಲುಗಾರರನ್ನು ಖಂಡಿತ ಏರ್ಪಡಿಸುವನು.
Footnotes
  • [1] ಗೈಬ್ ಅಂದರೆ ಪಂಚೇಂದ್ರಿಯಗಳಿಗೆ ಹಾಗೂ ಬುದ್ಧಿಗೆ ನಿಲುಕದ ವಿಚಾರಗಳು `ರಸೂಲ್' ಎಂಬುದರಲ್ಲಿ ಪ್ರವಾದಿಗಳು ಮಾತ್ರವಲ್ಲ ಸಂದೇಶ ತಲುಪಿಸುವ ಮಲಕ್‍ಗಳು ಒಳಪಡುತ್ತಾರೆ ಜಿಬ್‍ರೀಲರು ವಹೀ ತರುವಾಗ ಅವರ ಜೊತೆ ಗೌರವ ರಕ್ಷಕರಾಗಿ ನಾಲ್ಕು ಮಲಕ್‍ಗಳು ಇರುತ್ತಿದ್ದರು ಎಂದು ಸಈದ್ ಬಿನ್ ಜುಬೈರ್ ಅವರಿಂದ ವರದಿಯಾಗಿದೆ. `ಪ್ರವಾದಿಗಳಿಗೆ ಅಗೋಚರಗಳನ್ನು ಗೋಚರಗೊಳಿಸಲಾಗುವುದು ಎಂಬ ಈ ಆಯತ್ ಹಾಗೂ `ಅದೃಶ್ಯಗಳನ್ನು ಅವನು ಆರಿಸಿಕೊಳ್ಳುವ ಮುರ್ಸಲ್‍ಗಳ ಹೊರತು ಬೇರೆ ಯಾರಿಗೂ ಪ್ರತ್ಯಕ್ಷಗೊಳಿಸಲಾಗುವುದಿಲ್ಲ ಎಂಬ 3:179ನೇ ಆಯತ್‍ನ ಪ್ರಸ್ತಾಪದಿಂದ ಔಲಿಯಾಗಳಿಗೆ ಕರಾಮತ್ ಆಗಿ ಅದೃಶ್ಯಗಳನ್ನು ತಿಳಿಸಲಾಗುವುದಿಲ್ಲ ಎಂದು ಅರ್ಥವಿರುವುದಿಲ್ಲ. ಯಾಕೆಂದರೆ ಔಲಿಯಾಗಳಿಗೆ ಅದೃಶ್ಯಗಳನ್ನು ತಿಳಿಸಿಕೊಟ್ಟ ಬಗ್ಗೆ ಬೇರೆ ಆಯತ್‍ಗಳಲ್ಲಿ ಸ್ಪಷ್ಟವಿದೆ. ಆದ್ದರಿಂದ ಒಂದು ಅಥವಾ ಒಂದೆರಡು ಆಯತ್‍ಗಳ ಆಧಾರದಲ್ಲಿ ಮಾತ್ರ ಒಂದು ವಿಷಯವನ್ನು ನಿರ್ಧರಿಸಲಾಗುವುದಿಲ್ಲ. ಸಮಗ್ರ ಖುರ್‍ಆನ್ ಮತ್ತು ಹದೀಸ್‍ಗಳ ಮಂಥನದಿಂದ ದೊರೆಯುವ ಅಂತಿಮ ಫಲಿತಾಂಶವೇ ಧರ್ಮದಲ್ಲಿ ನಿರ್ಧರಿತ ಆಶಯಗಳಾಗಿ ರೂಪುಗೊಳ್ಳುತ್ತವೆ. ಹಾಗೆ ಪರಸ್ಪರ ವೈರುಧ್ಯವೆಂದು ಕಂಡುಬರುವ ಆಯತ್‍ಗಳನ್ನು ಒಂದರಿಂದ ಒಂದಕ್ಕೆ ವ್ಯಾಖ್ಯಾನವೆಂದು ಪರಿಗಣಿಸಬೇಕಾಗುತ್ತದೆ. ಪ್ರವಾದಿಗಳಿಗೆ ಅದೃಶ್ಯಜ್ಞಾನವು ಅವರ ಮುಅïಜಿಝತ್ ಎನಿಸುತ್ತದೆ. ಇಲ್ಲಿ ಪ್ರವಾದಿಗಳಿಗೆ ಎಂಬ ಪರಿಮಿತಿಯ ಉದ್ದೇಶವು ಪ್ರವಾದಿಗಳು ಮಲಕ್ ಮುಖಾಂತರ ಹಾಗೂ ಯಾವ ಮಾಧ್ಯಮವೂ ಇಲ್ಲದೆ ಅದೃಶ್ಯಜ್ಞಾನ ಪ್ರಾಪ್ತವಾಗುವವರು ಎಂಬುದರಿಂದಾಗಿದೆ. ಔಲಿಯಾಗಳಿಗೆ ಅದೃಶ್ಯ ತಿಳಿಯುವ ಮಾರ್ಗ ಇದಾಗಿರುವುದಿಲ್ಲ. ನಾವು ಪ್ರವಾದಿಗಳ ಮುಖಾಂತರ ಪರಲೋಕದ ಸ್ಥಿತಿಗಳನ್ನು ಅರಿತಿರುವಂತೆ ಅವರಿಗೆ ವಿಶೇಷ ಅರಿವಿನ ಮೂಲಕ ಪ್ರಾಪ್ತವಾಗುತ್ತದೆ. ಖುರ್‍ಆನ್ 28:7ರಲ್ಲಿ ಮೂಸಾನಬಿಯವರ ತಾಯಿಗೆ ಅಲ್ಲಾಹನು ಗೈಬ್ ತಿಳಿಸಿದ ವಿವರಣೆಯಿದೆ. 3:42ರಲ್ಲಿ ಮರ್ಯಮ್ ಬೀವಿಗೆ ಅದೃಶ್ಯ ತಿಳಿಸಿದ ಪ್ರಸ್ತಾಪವಿದೆ. ಆ ಬೀವಿಗಳು ಮುರ್ಸಲ್‍ಗಳಾಗಿರಲಿಲ್ಲ, ಔಲಿಯಾಗಳಾಗಿದ್ದರು. ಬುಖಾರಿ ಉಲ್ಲೇಖಿಸಿದ ಒಂದು ಹದೀಸ್‍ನಲ್ಲಿ ಹೀಗಿದೆ; `ನಬುವ್ವತ್‍ನಿಂದ ಇನ್ನು ಏನೂ ಉಳಿದಿಲ್ಲ. ಸುವಾರ್ತೆಗಳ (ಮುಬಶ್ಯಿರಾತ್) ಹೊರತು ಎಂದು ನಬಿ ಯವರು ಹೇಳಿದರು. ಸುವಾರ್ತೆಗಳು ಅಂದರೆ ಏನು ಎಂದು ಸಹಾಬಿಗಳು ಕೇಳಿದಾಗ `ಶ್ರೇಷ್ಠ ಕನಸುಗಳು' ಎಂದರು ನಬಿಯವರು. ನಬಿಯವರ ಆಗಮನದೊಂದಿಗೆ ಪ್ರವಾದಿತ್ವ ಕೊನೆಗೊಂಡಿದೆ. ಇನ್ನು ಆ ಪ್ರವಾದಿತ್ವದ ಅಂಶದಿಂದ ಉಳಿದಿರುವುದು ಸುವಾರ್ತೆಗಳ ಮೂಲಕ ಅಲ್ಲಾಹನು ತಿಳಿಸುವ ಕಾರ್ಯಗಳು. ನಬಿಗಳು ಇಲ್ಲದ್ದರಿಂದ ಆ ಕಾರ್ಯ ಔಲಿಯಾಗಳ ಮೂಲಕ ನೆರವೇರುತ್ತದೆ. ಕನಸುಗಳ ಮೂಲಕ ಅವರಿಗೆ ಅದೃಶ್ಯ ಕಾರ್ಯಗಳ ಅರಿವು ದೊರೆಯುತ್ತದೆ. (ಬೈಳಾವಿ 8/261)